Saturday, November 16, 2013

ಸ್ನೇಹ






ಬನ್ನಿ, ಹೀಗೇ ಸುಮ್ಮನೆ
ಒಂದರೆ ಘಳಿಗೆ ಧ್ಯಾನಿಸೋಣ



ಧುತ್ತೆಂದು ಎದುರಾಗುವ
ವೈರುಧ್ಯ, ವ್ಯಥೆ, ಗೊಂದಲ,
ಯಾತನೆಗಳ ದಾಳಿಗೆ
ಬದುಕು ಮುದುಡಿ ಹೋಗುವಾಗ,



ಆಸಕ್ತಿಯಿಂದ, ಕಾಳಜಿಯಿಂದ
ಬುದ್ದಿಗೆ ವಿವೇಕ ತುಂಬಿ,
ಭಾವಾವೇಶಕ್ಕೆ ತಡೆ ಹಾಕಿ,
ಹೊಸ ಚೈತನ್ಯ ತಂದು,



ಮನಸ್ಸನ್ನು ಹಗುರಾಗಿಸಿ,
ಬದುಕ ಅರಳಿಸುವ
ಶಕ್ತಿ, ಕಲೆ ಇರುವುದು
ಸ್ನೇಹಕ್ಕೇ ಅಲ್ಲವೇ..?!

No comments:

Post a Comment