Monday, September 12, 2011

ನಂದನವನ ಪ್ರಸಂಗ

                                                              (ಮನೆಯ ಒಳಗೆ)

ಅಮ್ಮ : ಬೇಕಾಗಿಲ್ಲ..!! ಯಾವುದೋ ಗೊತ್ತಿರದ ದೇಶಕ್ಕೆ ಹೋಗಿ, ದಿಕ್ಕಿಲ್ಲದ

           ಅನಾಥನಂತೆ ಬದುಕಿ, ಸಂಪಾದನೆ ಮಾಡಿ ಆ  ಸಂಪಾದನೆಯಲ್ಲಿ

           ನಮ್ಮನ್ನ ಸಾಕಬೇಕಿಲ್ಲ.
          
           ಮಗನಿಗೆ ಒಳ್ಳೆ ವಿದ್ಯೆ ಸಿಕ್ಕು, ಸಮಾಜದಲ್ಲಿ ನಾಲ್ಕು ಜನರ ಮಧ್ಯೆ 

           ಗೌರವವಾಗಿ ಬದುಕಲಿ ಅಂತ ಅವನನ್ನ ಓದಿಸಿ 
           
           ವಿದ್ಯಾವಂತನನ್ನಾಗಿ ಮಾಡಿಸಿದ್ದೇವೇ ಹೊರತು, ಹೀಗೆ ವಿದೇಶಿ ಹಣಕ್ಕೆ

           ತನ್ನನ್ನು ತಾನು ಮಾರಿಕೊಳ್ಳಲಿ ಅಂತ ಅಲ್ಲ!!  ಕರುಳ ಸಂಬಂಧವನ್ನು

           ಕತ್ತರಿಸಿಕೊಂಡು ಹೋಗಿ ಬೇರೆಲ್ಲೋ  ಬದುಕುವುದು ಇಷ್ಟು ಸಲೀಸಾಗಿ

           ಹೋಯಿತೆ  ಇವರಿಗೆ?!!



ಅಪ್ಪ : ಹೋಗಲಿ ಬಿಡು....ಅವರಿಗೆ ಎಲ್ಲಿ ಸಂತೋಷವೋ ಅಲ್ಲೇ ಇರಲಿ.  ನಮ್ಮ

          ನೆನಪುಗಳ ಜೊತೆ ಅವರ ಭವಿಷ್ಯವನ್ನು ಕಟ್ಟಿ  ಹಾಕುವುದು ಎಷ್ಟು ಸರಿ?!!

          ಅವರವರ ದಾರಿ ಅವರವರಿಗೆ....



                                                            

                                                               (ಮನೆಯ ಹೊರಗೆ)


ಗೆಳೆಯ :  ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಕಣೋ.  ಸಾವಿರದಲ್ಲಿ ಒಬ್ಬರಿಗೆ

             ಈ ರೀತಿ ಅವಕಾಶ ಹುಡುಕಿಕೊಂಡು ಬರುವುದು.  ಈ ಕೆಲಸದಿಂದ

             ನಿನಗಾಗುವ ಸಂಪಾದನೆಯಲ್ಲಿ ನೀನು ನಿನ್ನ ಅಪ್ಪ-ಅಮ್ಮನನ್ನು ಚೆನ್ನಾಗಿ
             
             ನೋಡಿಕೊಳ್ಳಬಹುದು.  ಇನ್ನೊಂದು ಸಲ ಯೋಚಿಸಿ ನೋಡು....


ಮಗ :  ಇಲ್ಲ ಕಣೋ...ನಾನು ಚೆನ್ನಾಗಿ ಯೋಚಸಿಯೇ ಈ ನಿರ್ಧಾರ

           ಮಾಡಿರುವುದು.  ಸಾವಿರದ ಜನರಲಿ ಒಬ್ಬರಿಗೆ ಸಿಗುವ
         
           ಅವಕಾಶ ನನಗೇ ಸಿಕ್ಕಿ, ನನ್ನ ಯೋಗ್ಯತೆ ಏನು ಅಂತ ತಿಳಿಸಿದೆ; ನನಗೆ

           ಅಷ್ಟು ಸಾಕು.  ಅಷ್ಟಕ್ಕೂ, ಅಪ್ಪ-ಅಮ್ಮನ ಜೊತೆಯಲ್ಲಿದ್ದು, ಅವರಿಗೆ

           ಆಧಾರವಾಗಿದ್ದುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದೇ

           ಹೊರತು, ದುಡ್ಡಿನಿಂದ  ಅಲ್ಲ ಕಣೋ...ನನಗೆ ಆ ಕೆಲಸ ಬೇಡ

            ಅಂತ ಆಗಲೇ ಹೇಳಿ ಬಂದಾಯಿತು.. :)

No comments:

Post a Comment